ದೂರ ದೂರ ದೂರ

ದೂರ ದೂರ ದೂರ ಮುಗಿಲ
ದೂರ ದೂರ ನೋಡುವಾ
ಆಳ ಆಳ ಆಳ ಕಡಲ
ಆಳ ಆಳ ಸೇರುವಾ

ದಂಡೆ ಇಲ್ಲ ಬಂಡೆ ಇಲ್ಲ
ಆದಿ ಅಂತ ದಾಟುವಾ
ನಾದವಿಲ್ಲ ನೋಟವಿಲ್ಲ
ಮೌನವೀಣೆ ಮೀಟುವಾ

ರಸದ ವಿಶ್ವ ಋತದ ವಿಶ್ವ
ಸತ್ಯ ಶಾಂತಿಯನುಪಮಾ
ಶಿವನ ಜ್ಯೋತಿ ಶಿವನ ಪ್ರೀತಿ
ತಂಪು ತನನ ನಿರುಪಮಾ

ನಾನು ಬಿಂದು ನೀನು ಬಿಂದು
ರಸದ ಸಿಂಧು ಜೇನ್ಮಳೆ
ನಾನು ತಂಪು ನೀನು ಇಂಪು
ಸೊಂಪು ಸುಖದ ಶಾಮಲೆ

ಹಂಚು ದೇಹ ಬಿಚ್ಚಿ ಹೋಗಿ
ವಿಮಲ ಕಮಲ ತೆರೆಯಿತು
ಆತ್ಮ ದೀಪ ದೀಪ್ತಿ ಚಿಮ್ಮಿ
ದೇವ ಬುಗ್ಗೆ ಸುರಿಯಿತು

ತಲೆಯ ಸೊಟ್ಟೆ ಒಡೆದು ಹೋಗಿ
ದಿವ್ಯ ರತ್ನ ತೋರಿತು
ಶೂನ್ಯ ಶೂನ್ಯ ಶೂನ್ಯದಾಚೆ
ಶಿವನ ಚೆಲುವು ಚಿಗುರಿತು


Previous post ಜಗದ್ಗುರು
Next post ಆಸೆ – ೧

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

cheap jordans|wholesale air max|wholesale jordans|wholesale jewelry|wholesale jerseys